ಪ್ರಧಾನಿ ಜೊತೆಗಿನ ಅಂತರಿಕ ಸಭೆಯ ನೇರ ಪ್ರಸಾರ ಮಾಡಿದಕ್ಕೆ ಕ್ಷಮೆಯಾಚಿಸಿದ ದೆಹಲಿ ಸಿಎಂ ಕೇಜ್ರಿವಾಲ್ | ಜನತಾ ನ್ಯೂಸ್
ನವದೆಹಲಿ : ಆಮ್ ಆದ್ಮಿ ಪಾರ್ಟಿ ಮುಖ್ಯಸ್ಥ ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು, ಕೇಂದ್ರ ಸರ್ಕಾರದ ಪ್ರೋಟೋಕಾಲ್ ಉಲ್ಲಂಘಿಸಿ ಆಂತರಿಕ ಸಭೆಗಳ ನೇರ ಪ್ರಸಾರ ಮಾಡಿ, ಬಳಿಕ ಪ್ರಧಾನಿ ನರೇಂದ್ರ ಮೋದಿಯವರಿಗೆ ಕ್ಷಮೆ ಯಾಚಿಸಿರುವ ಘಟನೆ ಇಂದು ವರ್ಚುಯಲ್ ಸಭೆಯ ಸಂದರ್ಭದಲ್ಲಿ ನಡೆದಿದೆ.
ವಿವಿಧ ರಾಜ್ಯಗಳ ಸಿಎಂಗಳೊಂದಿಗೆ ಪ್ರಧಾನಿ ಮೋದಿಯವರು ತಮ್ಮ ಅಧ್ಯಕ್ಷತೆಯಲ್ಲಿ ಕೋವಿಡ್-19 ಅನ್ನು ನಿಭಾಯಿಸುವ ಕುರಿತು ಆಂತರಿಕ ಸಭೆ ನಡೆಸುತ್ತಿದ್ದರು. ಪ್ರೋಟೋಕೋಲ್ ಉಲ್ಲಂಘಿಸಿ ಈ ಸಭೆಯ ನೇರ ಪ್ರಸಾರವನ್ನು ಮಾಡಿದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ, ಸರ್ಕಾರಿ ಪ್ರೋಟೋಕಾಲ್ ಅನುಸರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದರು.
ಸಿಎಂ ಕೇಜ್ರಿವಾಲ್ ಮಾತಿನ ಮಧ್ಯ ಪ್ರವೇಶಿಸಿದ ಪ್ರಧಾನಿ ಮೋದಿ ಯವರು, ನಮ್ಮ ಪರಂಪರೆ ಹಾಗೂ ಪ್ರೋಟೋಕಾಲ್ ಗಳ ಬಹಳ ಉಲ್ಲಂಘನೆಯಾಗುತ್ತಿದೆ, ಏಕೆಂದರೆ, ಯಾರೋ ಒಬ್ಬ ಮುಖ್ಯಮಂತ್ರಿ ಈ ರೀತಿಯ ಆಂತರಿಕ ಸಭೆಯ ನೇರಪ್ರಸಾರ ಮಾಡುತ್ತಿದ್ದಾರೆ. ಇದು ಉಚಿತವಲ್ಲ. ನಾವು ಯಾವಾಗಲೂ ಈ ವಿಷಯದಲ್ಲಿ ಸಂಯಮ ಪಾಲಿಸಬೇಕಾಗುತ್ತದೆ, ಎಂದು ಪ್ರಧಾನಿ ಮೋದಿ ಅಸಮಾಧಾನ ವ್ಯಕ್ತಪಡಿಸಿದರು.
ಈ ಬಳಿಕ ತಮ್ಮ ಮಾತು ಮುಂದುವರಿಸಿದ ಕೇಜ್ರಿವಾಲ್ ಅವರು ತಮ್ಮಿಂದ ತಪ್ಪಾಗಿದ್ದಲ್ಲಿ ಕ್ಷಮೆಯಿರಲಿ ಎಂದು ಕ್ಷಮೆಯಾಚಿಸಿದರು.